Monday 25 March 2013

ದುಷ್ಟರ ಸಹವಾಸ ಯಾವಾಗಲೂ ಕತ್ತಿಯ ಅಲಗಿನ ಮೇಲೆನಡೆಯುವಂತೆ, ತೊಂದರೆಯ  ಸುಳಿಯಲ್ಲೆ ಸಿಕ್ಕಿಕೊಂಡಿರುತ್ತೇವೆ.
ಹೆಜ್ಜೆ ಹೆಜ್ಜೆಗೂ ಕಾಡುತ್ತದೆ. ನಾಶ,ಮಾನಹಾನಿ ಕಟ್ಟಿಟ್ಟಬುತ್ತಿ. ದುಷ್ಟರ ಸ್ನೇಹ ಸೂರ್ಯನ ಬೆಳಗಿನ ಕಿರಣದಲ್ಲಿ ಉಂಟಾಗುವ ಉದ್ದದ ನೆರಳಿನಂತೆ  ಮೊದಲು ಹೆಚ್ಚುತ್ತಾ ಮಧ್ಯಾನ್ನ್ಹದ ವೇಳೆಗೆ ಕಡಿಮೆಯಾಗುತ್ತದೆ.  ಕಬ್ಬಿನಜಲ್ಲೆಯು ಬುಡದಿಂದ ಮೇಲಿನವರೆಗೆ ಸಿಹಿ ಅಂಶ ಕಡಿಮೆಯಾಗುತ್ತಾ ಹೋಗುತ್ತದೆ, ಅದರಂತೆ ದುಷ್ಟರ ಸ್ನೇಹ. ವ್ಯಕ್ತಿಯ ಹತ್ತಿರ ಧನಬಲವಿರುವವರೆಗೆ
ಅನುಕರಣೆ, ಅನುಸರಣೆ.  ಜೇಬು ಕಾಲಿಯೆಂದಾದರೆ   ದುಷ್ಟನು ಸುಮ್ಮನೆ ಬಿಟ್ಟಹೋಗುವುದಿಲ್ಲ ತೊಂದರೆಕೊಟ್ಟೆ ಹೋಗುತ್ತಾನೆ.
ದುಷ್ಟರ ಸಹವಾಸವು  ತನ್ನನ್ನು ಮತ್ತು  ತನ್ನ ಇಡೀ ಕುಟುಂಬವನ್ನು ಬಲಿತೆಗೆದುಕೊಳ್ಳುವುದೆಂಬುದು ಗಮನಕ್ಕೆ ಬರುವುದಿಲ್ಲ. ಇಂಥಹವರು ಯಾರೇ ಆದರೂ ದೂರವಿರುವುದು ಕ್ಷೇಮ. ದುಷ್ಟ ಪ್ರಾಣಿ,ಹಾವು,ಚೇಳು ಈ ಜಂತುಗಳಿಗೆ ತೊಂದರೆಕೊಟ್ಟೆ ಎಂಬ ಅರಿವಿರುವುದಿಲ್ಲವಷ್ಟೇ!!   ಅದರಂತಯೇ ದುಷ್ಟನೂ ಕೂಡ.  ದುಷ್ಟ ಸಹವಾಸದಿಂದ  ದೂರವಿರಬೇಕು ದುಷ್ಟರನ್ನು ದೂರವಿಡಬೇಕು.   ನಾವು ದುಷ್ಟರೊಡನೆ  ಗುರ್ತಿಸಿಕೂಳ್ಳಬಾರದು.   ಅದು ಎಂದೆಂದಿಗೂ ಅಪಾಯಕಾರಿ.  

No comments:

Post a Comment